September 8, 2012

BIDAR DITRICT POLICE DAILY CRIME UPDATE 08-09-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-09-2012



ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ 214/2012 ಕಲಂ 279, 337 ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ 07-09-2012 ರಂದು ಫಿಯರ್ಾದಿ ಕುಮಾರ ಪ್ರಥ್ವಿದೀಪ ತಂದೆ ದೀಪಕ ಚಿಟ್ಟಂಪಳ್ಳೆ ವಯ: 18 ವರ್ಷ, ಸಾ: ಗಣೇಶ ನಗರ ಕುಂಬರವಾಡ ಕ್ರಾಸ ಬೀದರ ಇತನು ಎಮ.ಎಸ.ಪಾಟೀಲ ಫಂಕ್ಷನ ಹಾಲ್ ಹತ್ತಿರ ಬೀದರ ನಯಾಕಮಾನ ಕಡೆಗೆ ಹೊಗುವ ಸಲುವಾಗಿ ಆಟೋರಿಕ್ಷಾದ ದಾರಿ ಕಾಯುತ್ತಾ ನಿಂತಾಗ ಗುಂಪಾ ಕಡೆಯಿಂದ ಆರೋಪಿ ಮೋಟಾರ ಸೈಕಲ ನಂ ಕೆಎ-38/ಕೆ-7627 ನೇದ್ದರ ಚಾಲಕನಾದ ಧೂಳಪ್ಪಾ ಸಾ: ಸಿಂದೋಲ, ತಾ: ಜಿ: ಬೀದರ ಇತನು ತನ್ನ ಮೋಟಾರ ಸೈಕಲನ್ನು ವೇಗವಾಗಿ, ದುಡಕಿನಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿಯರ್ಾದಿಗೆ ಡಿಕ್ಕಿ ಹೊಡೆದು ಸಾದಾಗಾಯ ಪಡಿಸಿ ಆರೋಪಿಯು ಅಪಘಾತ ಸ್ಥಳದಿಂದ ಮೋಟಾರ ಸೈಕಲ ಸಮೇತ ಓಡಿ ಹೊಗಿರುತ್ತಾನೆಂದು ಕೊಟ್ಟ ಫಿಯರ್ಾದಿಯ ಮೌಖಿಕ ಹೇಳಿಕಯ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.



ಜನವಾಡ ಪೊಲೀಸ್ ಠಾಣೆ ಗುನ್ನೆ ನಂ 98/2012 ಕಲಂ 498(ಎ), 323, 324 ಜೊತೆ 34 ಐಪಿಸಿ :-

ಫಿಯರ್ಾದಿತಳಾದ ಸವಿತಾ ಗಂಡ: ಭಿಮರಾವ ಮೇತ್ರೆ ವಯ: 20 ವರ್ಷ, ಜಾತಿ: ಧನಗರ, ಸಾ: ಕಪಲಾಪೂರ (ಎ) ಇಕೆಯ ಮದುವೆಯು ದಿನಾಂಕ 12-06-2011 ರಂದು ಕಪಲಾಪೂರ ಗ್ರಾಮದ ವೀರಶೆಟ್ಟಿ ರವರ ಮಗನಾದ ಭಿಮರಾವನ ಜೊತೆಯಲ್ಲಿ ಧರ್ಮದ ಪ್ರಕಾರ ಆಗಿದ್ದು, ಲಗ್ನವಾದ ನಂತರ 1-2 ತಿಂಗಳವರೆಗೆ ಆರೋಪಿತರಾದ ಗಂಡ ಭಿಮರಾವ, ಮಾವ ವೀರಶೆಟ್ಟಿ, ಅತ್ತೆ ಝರೆಮ್ಮಾ ರವರೆಲ್ಲರೂ ಚೆನ್ನಾಗಿ ನೋಡಿಕೊಂಡರು ನಂತರ ನಿನಗೆ ಅಡಿಗೆ ಮಾಡಲು ಬರುವದಿಲ್ಲಾ, ನಿನ್ನ ಗುಣ ಸರಿಯಾಗಿಲ್ಲಾ ಅಂತಾ ಜಗಳ ತೆಗೆಯುತ್ತಾ ಬಂದಿರುತ್ತಾರೆ, ನೀನು ಎಲ್ಲಿಂದ ಗಂಟ ಬಿದ್ದಿದ್ದಿ ಮನೆಯಿಂದ ಹೊರಗೆ ಹೋಗು ಅಂತಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾರೆ, ಸದರಿ ವಿಷಯ ಫಿಯರ್ಾದಿತಳು ನನ್ನ ತಂದೆ ತಾಯಿಗೆ ತಿಳಿಸಿದಾಗ ಅವರು ಊರಿಗೆ ಬಂದು ಆರೋಪಿತರಿಗೆ ಸರಿಯಾಗಿ ನೋಡಿಕೊಳ್ಳಿರಿ ಅಂತಾ ತಿಳುವಳಿಕೆ ಹೇಳಿ ಫಿಯರ್ಾದಿತಳಿಗೆ ಗಂಡನ ಮನೆಯಲ್ಲಿ ಬಿಟ್ಟು ಹೋದ ಮೇಲೆ ಆರೋಪಿತರು ಸದರಿ ವಿಷಯ ನಿನ್ನ ತಂದೆ ತಾಯಿಯರಿಗೆ ಏಕೆ ತಿಳಿಸಿದ್ದಿ ಅಂತಾ ಜಗಳ ಮಾಡಿದ್ದರಿಮದ ಹಾಗೂ ಫಿಯರ್ಾದಿತಳಿಗೆ ಕೊಡುವ ತ್ರಾಸಿನಿಂದ ಫಿಯರ್ಾದಿತಳಿಗೆ ಆಕೆಯ ತಂದೆ ತವರು ಮನೆಗೆ ಕರೆದುಕೊಂಡು ಬಂದಿರುತ್ತಾರೆ, ಇಂದಿಗೆ 15 ದಿವಸಗಳ ಹಿಂದೆ ಊರಿನ ರಘುನಾಥ ಪಂಚಾಳ, ಚೆನ್ನಪ್ಪಾ ಹುನ್ನಾ, ಧನರಾಜ ಯಲಶೆಟ್ಟೆ, ಸಂಗಪ್ಪ ಹಾವಶೆಟ್ಟೆ ರವರೆಲ್ಲರೂ ಕೂಡಿಕೊಂಡು ಫಿಯರ್ಾದಿತಳಿಗೆ ಕರೆದುಕೊಂಡು ಆರೋಪಿತರ ಮೆನೆಗೆ ಬಂದು ಕಪಲಾಪೂರ ಗ್ರಾಮದ ಹಿರಿಯರಾದ ವೈಜಿನಾಥ ಪಾಟೀಲ, ಮಲಶೇಟ್ಟಿ ಭಾಲ್ಕೆ ರವರೆಲ್ಲರೂ ಕೂಡಿ ಪಂಚಾಯತಿ ಹಾಕಿ ಆರೋಪಿತರಿಗೆ ಚೆನ್ನಾಗಿ ನೋಡಿಕೊಳ್ಳಿರಿ ಅಂತಾ ತಿಳುವಳಿಕೆ ಹೇಳಿ ಫಿಯರ್ಾದಿತಳಿಗೆ ಬಿಟ್ಟು ಹೋದಾಗ ಆರೋಪಿತರು ಮತ್ತೆ ಊರಿನಲ್ಲಿ ನಮ್ಮ ಮಾನ ಕಳೆದಿದ್ದಿ ಅಂತಾ ಜಗಳ ತೆಗೆದು ನನಗೆ ತೊಂದರೆ ನೀಡಿರುತ್ತಾರೆ, ದಿನಾಂಕ: 06-09-2012 ರಂದು ಫಿಯರ್ಾದಿತಳ ತಂದೆಯವರು ಮಾತನಾಡಲು ಬಂದಾಗ ಆರೋಪಿತರು ಅವಾಚ್ಯವಾಗಿ ಏನೂ ಮಾತನಾಡುತ್ತಿ ನಡೆ ಅಂತಾ ಕೈ ಹಿಡಿದು ಎಳೆದುಕೊಂಡು ಹೋಗಿ ಕೈಯಿಂದ ಮುಖದ ಮೇಲೆ, ತಲೆಯ ಮೇಲೆ ಹೊಡೆದಿರುತ್ತಾರೆಂದು ಫಿಯರ್ಾದಿತಳು ದಿನಾಂಕ 06-09-2012 ರಂದು ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.